ನಿನ್ನೊಡನೆ ಮಾಡುವ ಹೃದಯಾಲಾಪವು
ಪ್ರೇಯಸಿಯ ಪಿಸುಮಾತಿಗಿಂತಲೂ ಮಧುರ
ನಿನ್ನ ಸಂತೈಕೆ ಯಾವುದೇ ಪ್ರವಾದಿಯ ಬೋಧೆಗಿಂತ ಶಾಂತಿದಾಯಕ
ನೀನು ಮುನಿದು ಮೌನವಾಗಿ ಬಯ್ಯುವುದು
ಯಾವ ತಾಯಿಯ ಮುನಿಸಿಗಿಂತಲೂ ತಾಪದಾಯಕ
ನಿನ್ನ ಸರಳ ಸುಂದರ ವಾಣಿ ಯಾವುದೇ ಕಾವ್ಯಧ್ವನಿಗಿಂತ ರಸಮಯ
ನಿನ್ನ ದನಿ ಕೇಳಿಸದಷ್ಟು ಅಂತರಾಳದಲ್ಲಿ ಒಳನುಡಿಯುತ್ತಿದ್ದರೂ
ಯಾವುದೇ ಭೀಷಣ ಭಾಷಣದಂತೆ ಕಿವಿಗಪ್ಪಳಿಸುತ್ತದೆ
ನಿನ್ನ ನುಡಿಸಿಡಿಲು ಯಾವುದೇ ಕ್ರಾಂತಿಕಾರಿಗಿಂತಲೂ
ಹೆಚ್ಚು ಪರಿಣಾಮಕಾರಿಯಾಗಿ ನನ್ನಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ
ನನ್ನ ನೂರು ತಪ್ಪು ಹೆಜ್ಜೆಗಳಲ್ಲೊಂದು ಒಪ್ಪು ಹೆಜ್ಜೆಯಿಂದ ಹರ್ಷಿತಳಾಗಿ
ನೀನು ನನ್ನ ಭುಜತಟ್ಟಿ ಹುರಿದುಂಬಿಸುವುದು
ಯಾವುದೇ ವಿಶ್ವ ಸನ್ಮಾನ-ಪದಕ-ಪ್ರಶಸ್ತಿಗಿಂತಲೂ ಹೆಚ್ಚು ಸ್ಪೂರ್ತಿದಾಯಕ
ಆಗೊಂದೀಗೊಂದು ಸೆಳೆಮಿಂಚಿನಂತೆ ನೀನು ತೋರುವ ನವಕಿರಣ
ಯಾವುದೇ ಋಷಿಯ ಕಾಣ್ಕೆಯಂತೆ ವಿಜ್ಞಾನಿಯ ನವ ಶೋಧದಂತೆ
ಜೀವಿತವ ಸಾರ್ಥಕಗೊಳಿಸುತ್ತದೆ
ಇಷ್ಟಾದರೂ ನಿನ್ನ ನನ್ನ ಮುಖಭೆಟ್ಟಿ ಆಗಿಲ್ಲ
ನೀನಾರೆಂದು ನನಗೆ ತಿಳಿದಿಲ್ಲ.
Related Post
ಸಣ್ಣ ಕತೆ
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…